Published On: Sat, Aug 26th, 2023

ವಿಶ್ವಜ್ಯೋತಿ ಮಹಿಳಾ ಮಂಡಳಿ ವರಮಹಾಲಕ್ಷ್ಮೀ ವೃತ ಪೂಜೆ

ಬಂಟ್ವಾಳ:  ವಿಶ್ವಜ್ಯೋತಿ ಮಹಿಳಾ ಮಂಡಳಿ ಜೋಡುಮಾರ್ಗ ಇದರ  ಆಶ್ರಯದಲ್ಲಿ ವರಮಹಾಲಕ್ಷ್ಮೀ ವೃತ ಪೂಜೆಯು  ಪುರೋಹಿತ್ ಎಸ್.ರಮೇಶ್ ಆಚಾರ್ಯರ ನೇತೃತ್ವದಲ್ಲಿ  ಬಂಟ್ವಾಳ ಅಜೆಕಳ ವಿಶ್ವಕರ್ಮ ಸಭಾಭವನದಲ್ಲಿ ಶುಕ್ರವಾರ ನಡೆಯಿತು. ಇದೇ ಸಂದರ್ಭದಲ್ಲಿ ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರತಿಮಾ ಉಪೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಉಮಾ ಪದ್ಮನಾಭ ಆಚಾರ್ಯ ಹಾಗೂ ಶೋಭಾ ಚಂದ್ರಯ್ಯ ಆಚಾರ್ಯರನ್ನು ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷೆ ಪುಷ್ಪ ಡಿ. ಆಚಾರ್ಯ, ಕಾರ್ಯದರ್ಶಿ ಇಂದುಮತಿ ಸುರೇಶ್ ಕೈಕುಂಜೆ, ಸದಸ್ಯರಾದ ಲಕ್ಷ್ಮೀ ವೆಂಕಟರಮಣ ಆಚಾರ್ಯ,  ಸರೋಜ ವಿಶ್ವನಾಥ ಆಚಾರ್ಯ, ವಿಜಯ ಕಾಳಿದಾಸ ಆಚಾರ್ಯ, ಸೌಮ್ಯ ದಾಮೋದರ ಆಚಾರ್ಯ, ಪ್ರಫುಲ್ಲ ಆಚಾರ್ಯ, ಗೀತಾ ಚಂದ್ರಶೇಖರ್ ಆಚಾರ್ಯ,  ದಿಶಾ ಆಶೀರ್ವಾದ ಆಚಾರ್ಯ, ಶಾಲಿನಿ ರಾಜೇಂದ್ರ ಆಚಾರ್ಯ, ಗೀತಾ ರಮೇಶ್ ಆಚಾರ್ಯ, ಮಲ್ಲಿಕಾ ಶಿವರಾಮ್ ಆಚಾರ್ಯ, ಸುಜಾತ ಜಯರಾಮ್ ಆಚಾರ್ಯ, ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ್ ಆಚಾರ್ಯ ಮಾರ್ನ ಬೈಲು, ಆನೆಗುಂದಿ ಶ್ರೀ ಗುರುಸೇವಾ ಪರಿಷತ್ ನ ಬಂಟ್ವಾಳ ಘಟಕದ ಅಧ್ಯಕ್ಷರಾದ ಯುವರಾಜ್ ಆಚಾರ್ಯ ಭಂಡಾರಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter