ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ
ಬಂಟ್ವಾಳ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.) ಹಾಗೂ ಜೀರ್ಣೋದ್ದಾರ ಸೇವಾ ಸಮಿತಿ ನೀರಪಾದೆ ಬಾಳ್ತಿಲ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ವೇದಮೂರ್ತಿಗಳಾದ ಕೇಶವ ಶಾಂತಿಯವರು ವೈಧಿಕ ವಿಧಿ ವಿಧಾನಗಳನ್ನು ನಡೆಸಿದರು.ಜೀರ್ಣೋದ್ದಾರ ಸಮಿತಿಯ ಸಮಿತಿಯ ಗೌರವಾಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಶಿಲಾನ್ಯಾಸ ಗೈದರು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ನಾರಾಯಣ ಪೂಜಾರಿ ನಿಡ್ಯೆ ,ಧಾರ್ಮಿಕ ಪರಿಷತ್ತಿನ ಸದಸ್ಯ ಸೂರ್ಯ ನಾರಾಯಣ ಭಟ್ ಕಶೆಕೋಡಿ,ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ
ಸ್ಥಳದಾನಿ ಡೀಕಯ್ಯ ಪೂಜಾರಿ ಕಟ್ಟದ ಮೂಡು,ಹಿ.ಜಾ.ವೇ.ಯ ಪ್ರಮುಖರಾದ ರಾಧಕೃಷ್ಣ ಅಡ್ಯಾಂತ್ತಾಯ,ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಕು. ಹಿರಣ್ಮಯಿ ಗೋಪಾಲಶೆಣೈ, ಟ್ರಸ್ಟಿನ ಕಾರ್ಯದರ್ಶಿ. ಮೋಹನ್. ಪಿ. ಎಸ್, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಜಯರಾಮ್ ಕಲ್ಲಪಾಪು,ಆರ್ಥಿಕ ಸಮಿತಿ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ತೋಟ, ಜೀರ್ಣೋದ್ದಾರ ಸಮಿತಿಯ ಕಾರ್ಯಧ್ಯಕ್ಷರಾದ ಸುರೇಶ್ ಶೆಟ್ಟಿ ಕಾಂದಿಲ ಉಪಾಧ್ಯಕ್ಷರುಗಳಾದ ಶರತ್ ಪೂಜಾರಿ ಸೇನೆರೆಕೋಡಿ, ಶಿವರಾಜ್ ಕಾಂದಿಲ, ಯಶೋಧರ್ ಕರ್ಬೆಟ್ಟು ,ಪುರುಷೋತ್ತಮ ಪೂಜಾರಿ ಶೇಡಿಗುರಿ, ನೋಣಯ್ಯ ಪೂಜಾರಿ ಕಟ್ಟಡಮೂಡು ಗ್ರಾಮದ ಹಿರಿಯರು ಮತ್ತಿತರರು ಉಪಸ್ಥಿತರಿದ್ದರು.