ಮೂಡುಬಿದಿರೆ: ಮೂಡುಬಿದಿರೆ ವಲಯದ ಮೊದಲ ಸಹಾಯಕ ಶಿಕ್ಷಣಾಧಿಕಾರಿ ಆಗಿದ್ದ , ಬಾಯಾರು ಮೂಲದ ದಿವಂಗತ. ಬಿ. ವೆಂಕಟರಮಣ ಆಚಾರ್ ಅವರ ಪತ್ನಿ , ಕೊಡಗು ಜಿಲ್ಲಾ ಗೈಡ್ಸ್ ಮಾಜಿ ಕಮಿಶನರ್ ಪುಷ್ಪಾ (72) ಮಾ.7, ಮಂಗಳವಾರ ಮೂಡುಬಿದಿರೆ ಸಮೀಪ ತೆಂಕ ಎಡಪದವು ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೂಡುಬಿದಿರೆ ಪುತ್ತಿಗೆಮನೆ ಮೂಲದ ಸಕ್ಲೇಶಪುರ ಮಾಧವ ಆಚಾರ್ಯರ ಪುತ್ರಿ ಪುಷ್ಪಾ ಅವರು ಕೃಷಿಕರಾಗಿದ್ದರು ಎಡಪದವು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘಕ್ಕೆ 30 ಸೆಂಟ್ಸ್ ಜಾಗ ದಾನ ಮಾಡಿದ್ದರು.
