ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಎ.೧೨ರಂದು ಮಂಗಳವಾರ ನಡೆಯಿತು. ದೇವಳದ ತಂತ್ರಿಗಳಾದ ಸುಬ್ರಹಣ್ಯ ತಂತ್ರೀ , ವೆಂಕಟೇಶ್ ತಂತ್ರೀ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು. ಬಂಟ್ವಾಳ ಶಾಸಕರಾದ ಯು.ರಾಜೇಶ್ ನಾಯ್ಕ್ ಉಳಿಪಾಡಿ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಆನುವಂಶಿಕ ಮೊಕ್ತೇಸರರಾದ, ಯು.ತಾರಾನಾಥ ಆಳ್ವ ಉಳಿಪಾಡಿಗುತ್ತು, ಚೇರ ಸರ್ಯನಾರಾಯಣ ರಾವ್ ಮತ್ತು ಅಧಿಕಾರಿವರ್ಗದವರು ಉಪಸ್ಥಿತರಿದ್ದರು
ಸಂಜೆ ಸುಮಾರು ಆರು ಗಂಟೆಯ ಸಮಯದಲ್ಲಿ ದೇವಸ್ಥಾದಲ್ಲಿ ದೇವರಿಗೆ ವಿಶೇ಼ ಪೂಜೆ ನಡೆದ ಬಳಿಕ ಸಕಲ ಸಡಗರದೊಂದಿಗೆ ಮಹಾರಥದಲ್ಲಿ ಶ್ರೀ ದೇವರನ ಆಶೀನಗೊಳಿಸಲಾಯಿತು. ನಂತರ ಧೇವಸ್ಥಾನದ ರಥ ಬೀದಿಯಲ್ಲಿ ಒಂದು ಸುತ್ತು ಮಹಾರಥವನ್ನು ಸಾವಿರಾರು ಭಕ್ತರು ಎಳೆದು ಚೆಂಡಿನಗದ್ದೆಯಲ್ಲಿ ನಿಲ್ಲಿಸಿ ಸುಡುಮದ್ದು ಸಿಡಿಸಲಾಯಿತು,




