ಬಂಟ್ವಾಳ: ಓಂ ಶ್ರೀ ಗೆಳೆಯರ ಬಳಗ ನಾಯಿಲ ಇದರ ನೂತನ ಅಧ್ಯಕ್ಷರಾಗಿ ನಾಗೇಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಉಳಿದಂತೆ ಪದಾಧಿಕಾರಿಗಳಾಗಿ ಕಮಾಲಾಕ್ಷ ಕೊಟ್ಟಾರಿ( ಉಪಾಧ್ಯಕ್ಷ), ಲೋಹಿತ್ ಕುಮಾರ್( ಪ್ರಧಾನ ಕಾರ್ಯದರ್ಶಿ), ನವೀನ್ ಕುಲಾಲ್ ( ಜತೆ ಕಾರ್ಯದರ್ಶಿ),ರಾಜೇಶ್ ಕೋಟ್ಯಾನ್ ( ಸಂಘಟನಾ ಕಾರ್ಯದರ್ಶಿ), ಸುಹಾನ್( ಕ್ರೀಡಾ ಕಾರ್ಯದರ್ಶಿ),ಶರತ್ ( ಲೆಕ್ಕಪರಿಶೋಧಕರಾಗಿ) ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಬಳಗದ 17 ನೇ ವಾರ್ಷಿ ಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ. 
