ವಿಟ್ಲ: ಭಾರತೀಯ ಸೇನೆಯಿಂದ ನಿವೃತ್ತಿಯಾಗಿ ಊರಿಗೆ ಮರಳಿದ ಯೋಧ ದಯಾನಂದ ಸೆರಂತಿಮಠ ಇವರನ್ನು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಮಾಜಿ ಅಧ್ಯಕ್ಷ ಪ್ರವೀಣ ಚಂದ್ರ ಆಳ್ವ, ವಕ್ತಾರ ರಮಾನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಸುನಿತಾ ಕೋಟ್ಯಾನ್ ಮತ್ತು ಲತಾವೇಣಿ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ವಿ ಕೆ ಎಂ, ಕಾರ್ಯದರ್ಶಿಗಳಾದ ಎಸ್ ಕೆ ಮಹಮ್ಮದ್ ಮತ್ತು ರಶೀದ್ ವಿ ಎ, ಕಾರ್ಮಿಕ ಘಟಕ ದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ ಮಾಜಿ ಪಂಚಾಯತ್ ಸದಸ್ಯರುಗಳಾದ ರಘುರಾಮ ರೈ, ಸಮೀರ್ ಪಳಿಕೆ ಮತ್ತು ಎಂ ಕೆ ಮೂಸ ಉಪಸ್ಥಿತರಿದ್ದರು.
