ಬಿಜೆಪಿ ಬೂತ್ ಅಧ್ಯಕ್ಷರ ಮನೆ ಭೇಟಿ ಮತ್ತು ನಾಮ ಫಲಕ ಅನಾವರಣ, ಸಮಾರೋಪ ಸಮಾರಂಭ
ಪೊಳಲಿ: ಬಂಟ್ವಾಳ ತಾಲೂಕಿನ ಬೂತ್ ಅಧ್ಯಕ್ಷರ ಮನೆ ಭೇಟಿ ಮತ್ತು ನಾಮ ಫಲಕ ಅನಾವರಣ ಕಾರ್ಯಕ್ರಮವು ಬಿಜೆಪಿಯ ಸಂಸದ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮವು ನ.೦೧ ರಂದು ಸೋಮವಾರ ಕರಿಯಂಗಳ ಗ್ರಾಮದ ನಾಲ್ಕು ಬೂತ್ ಅಧ್ಯಕ್ಷರ ಮನೆ ಭೇಟಿ ಮತ್ತು ನಾಮ ಫಲಕ ಅನಾವರಣ ಕಾರ್ಯಕ್ರಮ ನಡೆದ ಬಳಿಕ ಪೊಳಲಿ ಸರ್ವಮಂಗಳ ಸಭಾಭವನದಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪುಜಾರಿ ಬಾಳಿಕೆ, ಮಂಡಲದ ಪ್ರದಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಮಾಜಿ ತಾಲೂಕು ಪಂಚಾಯತ್ ಸದಸ್ಯ ವೆಂಕಟೇಶ ನಾವಡ ಪೊಳಲಿ , ಅಮ್ಟಾಡಿ ಮಹಾ ಶಕ್ತಿಕೇಂದ್ರದ ಅದ್ಯಕ್ಷ ಚಂದ್ರಾವತಿ ಪೊಳಲಿ, ಬೂತ್ ನ ಅದ್ಯಕ್ಷ ನವೀನ್ ಕಟ್ಟಪುಣಿ, ವಸಂತ ಕರಿಯಂಗಳ, ಅಶೋಕ ಬಡಕಬೈಲ್, ಲೋಕೇಶ್ ಸಾಣೂರು ಪದವು, ಶಕ್ತಿಕೇಂದ್ರ ಪ್ರಮುಖ ಕಿಶೋರ್ ಪಲ್ಲಿಪಾಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಯಶವಂತ ಕೋಟ್ಯಾನ್ ಪೊಳಲಿ. ಪಂಚಾಯತ್ ಸದಸ್ಯರಾದ ಲೋಕೇಶ್ ಭರಣಿ, ಗೀತ ಮಣಿಕಂಠಪುರ, ಪೊಳಲಿ ರಾಧಕೃಷ್ಣ ತಂತ್ರಿ, ಕಾರ್ತಿಕ್ ಬಲ್ಲಾಳ್ ಹಾಗೂ ಪ್ರಮುಖರಾದ ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ ಬಡಕಬೈಲ್, ಸುರೇಶ್ ಮಣಿಕಂಠಪುರ, ಚರಣ್ ಬಡಕಬೈಲ್, ಜಯಂತ ಮಣಿಕಂಠಪುರ, ಹರೀಶ್ ಕಲ್ಕುಟ, ಗೋಪಾಲಕೃಷ್ಣ ಶೆಟ್ಟಿ, ಕರಿಯಂಗಳ ಗ್ರಾಮದ ಪ್ರಭಾರಿ ಯಶವಂತ್ ನಗ್ರಿ, ರೋಶನ್ ಗರೋಡಿ ಮತ್ತಿತರರು ಉಪಸ್ಥಿತರಿದ್ದರು.