ವಿಟ್ಲ: ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ವಿಟ್ಲ ಇದರ ೧೬ನೇ ವರ್ಷದ ಮಹಾಸಭೆಯು ಶ್ರೀ ಕಾಶಿ ಯುವಕ ಮಂಡಲದ ಸಭಾ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಡ್ರೈವರ್ಗಳಾದ ವಿಠಲ ಶೆಟ್ಟಿ, ಲಾಡಿಸ್ ಡಿ ಸೋಜಾ ಕನ್ಯಾನ, ಮೋಹನ ಬಂಗೇರ ಹಾಗೂ ಗೌರವ ಸಲಹೆಗಾರ ಬಾಲಕೃಷ್ಣ ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ತಾರಾನಾಥ, ಗೌರವಾಧ್ಯಕ್ಷ ರಾಮಣ್ಣ ವಿಟ್ಲ ಕಾನೂನು ಸಲಹೆಗಾರ ಪದ್ಮನಾಭ ಪೂಜಾರಿ ಅಳಿಕೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.
