ದಡ್ಡಲಕಾಡು ವಿದ್ಯಾಸಂಸ್ಥೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಪ್ರಕಾಶ್ ಅಂಚನ್
ಬಂಟ್ವಾಳ : ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಇದರ ಅಧ್ಯಕ್ಷ, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದಡ್ಡಲಕಾಡು ಇದರ ನಿರ್ಮಾಣ ಹಾಗೂ ಅಭಿವೃದ್ಧಿಯ ರೂವಾರಿ ಪ್ರಕಾಶ್ ಅಂಚನ್ ಅವರು ತನ್ನ ಹುಟ್ಟುಹಬ್ಬವನ್ನು ದಡ್ಡಲಕಾಡು ವಿದ್ಯಾಸಂಸ್ಥೆಯ ಆವರಣದಲ್ಲಿ ತೆಂಗಿನ ಗಿಡ (ಕಲ್ಪವೃಕ್ಷ) ನೆಟ್ಟು ಸರಳವಾಗಿ ಆಚರಿಸಿದರು.ಶಾಲೆಯೇ ದೇಗುಲ ಎನ್ನುವ ಮಹೋನ್ನತ ದೃಷ್ಟಿಕೋನವನ್ನಿಟ್ಟುಕೊಂಡಿರುವ ಪ್ರಕಾಶ ಅಂಚನ್ ತನ್ನ ಹುಟ್ಟು ಹಬ್ಬವನ್ನೂ ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಯಲ್ಲಿಯೇ ಆಚರಿಸಿ ಗಮನ ಸೆಳೆದರು. ಕೊರೋನಾ ದೂರವಾಗಲಿ, ಶಾಲೆಗಳು ಮತ್ತೆ ತೆರೆಯಲಿ ಮಕ್ಕಳ ಕಲರವ ಶಾಲೆಗಳಲ್ಲಿ ಕೇಳಿ ಬರುವಂತಾಗಲು ದೇವರು ಅನುಗ್ರಹಿಸಲಿ ಎಂದು ತನ್ನ ಜನ್ಮದಿನದ ಪ್ರಯುಕ್ತ ಆಶಯ ವ್ಯಕ್ತಪಡಿಸಿದರು.ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಪುರುಷೋತ್ತಮ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಸೇಸಗುರಿ, ಉದಯ್, ಕರುಣಾಕರ ಕುಲಾಲ್, ಜಗದೀಶ್, ಲೋಕೇಶ್, ಮಹೇಶ್ ಕುಲಾಲ್ ಡೆಚ್ಚಾರ್, ಪ್ರಶಾಂತ್, ಸಂತೋಷ್ ಕುಮಾರ್, ಸುರೇಶ್ ಡೆಚ್ಚಾರ್, ರಾಕೇಶ್, ಧನುಷ್, ರಾಜೇಶ್ ಕೇದಗೆ, ಪಂಜಿಕಲ್ಲು ಪಂಚಾಯತ್ ಸದಸ್ಯರಾದ ಪೂವಪ್ಪ ಮೆಂಡನ್, ಚಿತ್ರಾಕ್ಷಿ ಸತೀಶ್, ರೂಪಾ ಲೋಕನಾಥ್ ಉಪಸ್ಥಿತರಿದ್ದು ಶುಭಾಶಯ ಕೋರಿದರು.