ಮೂಡುಬಿದಿರೆ: ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಸಿರೇ ಉಸಿರು ಅಭಿಯಾನವನ್ನು ಸ್ವರಾಜ್ಯ ಮೈದಾನದ ಬಳಿ ನಿರ್ಮಾಣ ಹಂತದಲ್ಲಿರುವ ಕಿರು ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಯಿತು.

ಪುರಸಭಾ ಸದಸ್ಯ ರಾಜೇಶ್ ನಾಯ್ಕ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಸಂಚಾಲಕರಾದ ರಾಹುಲ್ ,ಸದಸ್ಯರುಗಳಾದ ಅಭಿಷೇಕ್ ಸಾಲ್ಯಾನ್, ವಿಜೇಶ್ ಅಮೀನ್, ಶರತ್ , ವಿದ್ಯಾನಂದ ಪೂಜಾರಿ,ನಿತಿನ್ ಭಟ್,ಪ್ರಕಾಶ್ ಗಾಂಧಿನಗರ, ಗಣೇಶ್ ಉಪಸ್ಥಿತರಿದ್ದರು.
