ಪೊಳಲಿ:ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಪುನರ್ನವಿಕರಣಗೊಂಡ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸಾಣದಲ್ಲಿ ಪ್ರತಿಷ್ಠಾಪಣೆಗೊಳ್ಳಲಿರುವ ಪಂಚಲೋಹದ ಮೂರ್ತಿಯನ್ನು ಅರ್ಕುಳ ಬೀಡಿನಿಂದ ಫೆ.೧೨ರಂದು ಶುಕ್ರವಾರ ಶ್ರೀ ಕ್ಷೇತ್ರ ಪೊಳಲಿಗೆ ಸಮರ್ಪಿಸಲು ಭಕ್ತಾಧಿಗಳೊಂದಿಗೆ ಪಲ್ಲಕ್ಕಿಯಲ್ಲಿ ತರಲಾಯಿತು.
ಈ ಸಂದರ್ಭದಲ್ಲಿ ದೇವಳದ ಸುಬ್ರಹ್ಮಣ್ಯ ತಂತ್ರಿ, ಮೊಕ್ತೇಸರ ಹಾಗೂ ಪವಿತ್ರಪಾಣಿ ಮಾಧವ ಭಟ್, ಅರ್ಚಕರಾದ ನಾರಾಯಣ ಭಟ್ ಪರಮೇಶ್ವರ ಭಟ್, ಕೆ.ರಾಮ್ ಭಟ್ ಆಡಳಿತ ಮೊಕ್ತೇಸರ ಡಾಮ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಮೊಕ್ತೇಸರರಾದ ಯು. ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಹಾಗೂ ಕೃಷ್ಣ ರಾಜ್ ಮಾರ್ಲ, ಕೃಷ್ಣಕುಮಾರ್ ಪೂಂಜ, ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಕಂಪ ಸದಾನಂದ ಆಳ್ವ , ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಮಜಿ ರಾಮ್ದಾಸ್ ಕೋಟ್ಯಾನ್, ತಾರಾನಾಥ ಕೊಟ್ಟಾರಿ ವಿದ್ಯಾಚರಣ್ ಶೆಟ್ಟಿ, ಮಾಧವ ಮಯ್ಯ ಹಾಗೂ ಉಳ್ಲಾಕ್ಲು ಮಗೃಂತ್ತಾಯ ದೈವದ ಭಕ್ತಾಧಿಗಳು ಇದ್ದರು.
