ಕಡ್ತಲ :ವಸಂತ ಪೂಜಾರಿ ಗೆಳೆಯರ ಬಳಗ ಕಡ್ತಲ, ಶ್ರೀದೇವಿ ಗೆಳೆಯರ ಬಳಗ ಕಡ್ತಲ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲು, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿ, ಲಯನ್ಸ್ ಕ್ಲಬ್ ಮುನಿಯಾಲು, ಅಭಯಹಸ್ತ ಉಡುಪಿ, ರಕ್ತನಿಧಿ ವಿಭಾಗ KMC ಮಣಿಪಾಲ ಇವರ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಡ್ತಲ ಶಾಲೆಯಲ್ಲಿ ನಡೆಯಿತು.

ವಸಂತ ಪೂಜಾರಿ ಗೆಳೆಯರ ಬಳಗ ಇದರ ಅಧ್ಯಕ್ಷ ಸಂತೋಷ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಚಂದ್ರಿಕಾ ಕಿಣಿ, KMC ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಫಾತಿಮಾ, ಕಡ್ತಲದ ಜನಪ್ರಿಯ ವೈದ್ಯ ಡಾ.ಪ್ರಮೋದ್ ಹೆಗ್ಡೆ, ಶೇಖರ್ ಕಡ್ತಲ, ಗೋಪಿನಾಥ್ ಭಟ್, ರಾಜೇಶ್ ಶೆಟ್ಟಿ, ಸತೀಶ್ ಸಾಲ್ಯಾನ್ ಉಪಸ್ಥಿತರಿದ್ದರು.
