ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯು ಪದವಿ ಕಾಲೇಜಿನ ಪ್ರಾಂಶುಪಾಲ, ಸಂಘದ ಗೌರವಾಧ್ಯಕ್ಷ ಡಾ.ರಾಧಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ನಾಗರಾಜ್ ಬಿ., ಕಾರ್ಯದರ್ಶಿಯಾಗಿ ಪ್ರೊ.ರಮೇಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಪ್ರವೀಣ್ ಜೈನ್, ಸುಭಾಶ್ಚಂದ್ರ ಶೆಟ್ಟಿ, ಚೇತನಾ ಪ್ರಶಾಂತ್(ಉಪಾಧ್ಯಕ್ಷರು), ಪ್ರಸನ್ನ ಶೆಣೈ (ಕೋಶಾಧಿಕಾರಿ), ಉದಯ ಕುಮಾರ್, ಗಾಯತ್ರಿ, ಅಶ್ವಿನಿ (ಜೊತೆ ಕಾರ್ಯದರ್ಶಿಗಳು), ಹರಿಪ್ರಸಾದ್ ನಾಯಕ್, ಸುರೇಖಾ ಭಟ್, ಅಕ್ಷಯ ಜೈನ್ (ಸಾಂಸ್ಕøತಿಕ ಕಾರ್ಯದರ್ಶಿ), ಸಂದೀಪ್ ಆಚಾರ್ಯ, ಮೊಹಮದ್ ಅಲೀಮ್, ಪ್ರಿಯದರ್ಶಿನಿ, ಪೂರ್ಣಿಮಾ (ಕ್ರೀಡಾ ಕಾರ್ಯದರ್ಶಿಗಳು) ಆಯ್ಕೆಯಾಗಿದ್ದಾರೆ.
ಸಂಘದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಸನ್ನ ಶೆಣೈ ಲೆಕ್ಕಪತ್ರ ಮಂಡಿಸಿದರು.
