ಕೋಲಾರ : ಡಿ15ರಂದು ನಡೆಯಲಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ -೨೦೨೦ ಪ್ರಯುಕ್ತ ಆರ್.ಅನಿಲ್ಕುಮಾರ್ ತಂಡದ ಕೋಲಾರ ತಾಲೂಕು ಅಭ್ಯರ್ಥಿಗಳು ನಗರದ ಬಿಇಓ ಕಛೇರಿ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಕರಪತ್ರ ಬಿಡುಗಡೆ ಮಾಡಿ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಮತಯಾಚನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೋಲಾರ ತಾಲೂಕು ಅಭ್ಯರ್ಥಿಗಳಾದ ಆರ್,ಅನಿಲ್ ಕುಮಾರ್, ಎನ್.ಮುನಿರಾಜು, ಕೆ.ಟಿ.ನಾಗರಾಜ್, ಬಿ.ಎಂ.ನಾರಾಯಣಸ್ವಾಮಿ, ಸಿ.ಮುನಿರಾಜ, ಆರ್.ಆಂಜನೇಯಪ್ಪ, ಅಯಾಜ್ ಅಹಮದ್, ವಿ.ಚಂದ್ರಪ್ಪ, ಕೆ.ಸಿ. ಮುನಿರಾಜು. ಎನ್. ನಂಜುಂಡಗೌಡ, ಎಸ್. ಗೌರಮ್ಮ, ಜೆ.ಎನ್.ಹೇಮಲತ, ಜಯಲಕ್ಷ್ಮೀ , ಸಿ.ವಿ.ಮಂಜುಳ, ಆರ್.ಮಂಜುಳ, ಪದ್ಮಮ್ಮ.ಪಿ, ಆರ್.ಸವಿತ, ವರಲಕ್ಷ್ಮೀ. ಹೆಚ್.ಸಿ.ಬೈರೆಗೌಡ, ಪಿ. ಕೋಟೇಶ್ವರ್ರಾವ್, ಕೆ.ಎಂ.ಮುನಿಸ್ವಾಮಿ, ಸಿ. ನಾರಾಯಣಸ್ವಾಮಿ, ಬಿ.ಸತೀಶ್ ಸೇರಿದಂತೆ ಶಿಕ್ಷಕ ಮುಖಂಡರಾದ ಹೆಚ್.ಎಂ.ಕೃಷ್ಣಪ್ಪ, ವೆಂಕಟಶಿವಪ್ಪ, ಕೆ.ಶ್ರೀನಿವಾಸ್, ಖಾದರ್ ಇಲಾಹಿ, ಶ್ರೀರಾಮ್, ಮಲ್ಲಿಕಾರ್ಜುನಯ್ಯ, ಎಂ.ಸುರೇಶ್ ಬಾಬು ಮುಂತಾದವರು ಉಪಸ್ಥಿತರಿದ್ದರು.

