ಸುದ್ದಿ9ಮಂಗಳೂರು:ಖಾಸಗಿ ಬಸ್ ಚಾಲಕ ಅನ್ವರ್ ಹಾಗೂ ನಿವರ್ಾಹಕ ರಾಕೇಶ್ ಎಂಬವರ ಮೇಲೆ ಜೋಸ್ಸಿ ಡಿÙಳಸೋಜಾ, ದಿಲ್ರಾಜ್ ಫೆನರ್ಾಂಡೀಸ್ ಮತ್ತು ಇತರರು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಕುಲಶೇಖರ ಬಳಿ ಅ.13ರಂದು ನಡೆದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೆ.13ರಂದು ಮೂಡುಶೆಡ್ಡೆ ಕಡೆಯಿಂದ ತಲಪಾಡಿ ಕಡೆಗೆ ಟ್ರಿಪ್ನ್ನು ಮಾಡಿಕೊಂಡು ಹೋಗುತ್ತಾ ಬೆಳಗ್ಗೆ 9 ಗಂಟೆ ಸಮಯಕ್ಕೆ ಕುಲಶೇಖರ ಬಳಿ ತಲುಪಿದಾಗ ಕಾರಂನಲ್ಲಿ ಬಂದ ಆರೋಪಿಗರು ಕಾರನ್ನು ಬಸ್ಗೆ ಅಡ್ಡ ಅಟ್ಟು ತಡೆದು ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನ ಮ್ಯಾನೇಜರ್ ರಾಜೇಶ್ ಎಂಬವರನ್ನು ಇನ್ನೆರಡು ದಿನಗಳಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.
