ಕೈಕಂಬ : ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ(ರಿ)ದ ನಿಕಟಪೂರ್ವ ಅಧ್ಯಕ್ಷ, ಗುರುಪುರ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣದ ರೂವಾರಿ, ವೃತ್ತಿಯಲ್ಲಿ ಕಟ್ಟಡ ಕಾಂಟ್ರಾಕ್ಟರ್ ಆಗಿದ್ದ ಪುಣಿಕೋಡಿ ನಿವಾಸಿ ಸುಧಾಕರ ಅಮೀನ್(೫೩) ಅವರು ಅಲ್ಪಕಾಲದ ಅನಾರೋಗ್ಯದಿಂದ ಅ.೨೩ರಂದು ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಅ. ೨೪ರಂದು ಅಂತ್ಯ ಸಂಸ್ಕಾರ ನಡೆಯಿತು. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಶಾಸಕ ಡಾ. ಭರತ್ ಶೆಟ್ಟಿ ಸಹಿತ ಹಲಾವಾರು ಗಣ್ಯರು ಅಮೀನ್ ಬಿರ್ವಬಿತ್ತ್ ಲ್ ಮನೆಗೆ ಭೇಟಿ ನೀಡಿ ಮೃತರ ಆತ್ಮಕ್ಕೆ ಸದ್ಗತಿ ಕೋರಿದರು.
