ಬಂಟ್ವಾಳ: ಮೆಲ್ಕಾರ್ ಸಮೀಪದ ಬೋಗೋಡಿ ಬಳಿ ಶುಕ್ರವಾರ ಸಂಜೆ ರೌಡಿಶೀಟರ್ ಚೆನ್ನ ಫಾರೂಕ್ ನನ್ನು ಹತ್ಯೆಗೈದ ಪ್ರಕರಣ ಆರೋಪಿಯೊಬ್ಬನ ಕಾಲಿಗೆ ಬಂಟ್ವಾಳ ಪೊಲೀಸರು ಗುಂಡಿನ ದಾಳಿಗೈದ ಘಟನೆ ಶನಿವಾರ ಬೆಳಗ್ಗಿನ ಜಾವ ಪುತ್ತೂರು ಸಮೀಪದ ಗುಂಡ್ಯ ಬಳಿ ನಡೆದಿದ್ದು, ಈ ಕಾರ್ಯಾಚರಣೆಯಲ್ಲಿ ಕೊಲೆ ಆರೋಪಿಯೋರ್ವನನ್ನು ಬಂಧಿಸಲಾಗಿದ್ದು, ಇಬ್ಬರೂ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ಹಾಗೂ ಕೊಲೆ ಆರೋಪಿ ಖಲೀಲ್ ಅವರಿಗೆ ಗಾಯವಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫಾರೂಕ್ ಹತ್ಯಾ ಆರೋಪಿಗಳಾದ ಖಲೀಲ್ ಮತ್ತು ಸಹಚರರಿಬ್ಬರು ಬೆಂಗಳೂರು ಕಡೆಗೆ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರಿಸಿಕೊಂಡು ಆರೋಪಿಗಳ ಬಂಧನ ಕಾರ್ಯಾಚರಣೆಗಾಗಿ ಬಂಟ್ವಾಳ ನಗರ ಠಾಣಾ ಎಸ್ ಐ ಅವಿನಾಶ್ ಹಾಗೂ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಮತ್ತವರ ತಂಡ ಬೆನ್ನಟ್ಟಿ ಹೋಗಿತ್ರು,ಈ ಸಂದರ್ಭ ಖಲೀಲ್ ಪೊಲೀಸರ ಮೇಲೆ ತಲವಾರು ದಾಳಿ ನಡೆಸಿದ್ದಾನೆ. ಆಗ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗುಂಡಿನ ದಾಳಿ ನಡೆಸಿದ್ದು,ಆರೋಪಿ ಖಲೀಲ್ ನ ಕಾಲಿಗೆ ಗುಂಡು ಹೊಕ್ಕಿತ್ತು. ಈ ಹತ್ಯಾ ಪ್ರಕರಣ ಹಂತಕರ
ಪತ್ತೆಗಾಗಿ ಎಸ್.ಪಿ. ಲಕ್ಮೀಪ್ರಸಾದ್ ವಿಶೇಷ ತಂಡ ರಚಸಿದ್ದರು. ಈ ಹಿನ್ನಲೆಯಲ್ಲಿ ಆರೋಪಿಗಳ ಬಂಧನಕ್ಕೆ ಎಸ್.ಐ.ಅವಿನಾಶ್ ಹಾಗೂ ಪ್ರಸನ್ನ ಮುಂದಾಗಿದ್ದರು. ಈ ವೇಳೆ ಪೋಲೀಸರ ಮೇಲೆಯೇ ಆರೋಪಿಗಳು ತಲವಾರು ದಾಳಿ ನಡೆಸಿದ್ದು, ಆರೋಪಿಗಳಿಗೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.ಖಲೀಲ್ ಸಹಚರರಾದ ಹಫೀಜ್ ಹಾಗೂ ಇನ್ನೊಬ್ಬ ಪಕ್ಕದ ಗುಡ್ಡೆಗೆ ಓಡಿ ತಲೆ ಮರೆಸಿಕೊಂಡಿದ್ದಾರೆ. ಉಪ್ಪಿನಂಗಡಿ ಎಸ್.ಐ.ಈರಯ್ಯ ಇವರಿಬ್ಬರ ಬಂಧನಕ್ಕೆ ಶೋಧ ಕಾರ್ಯನಡೆಸುತ್ತಿದ್ದಾರೆ.
ಕೋಮು ಗಲಭೆ ಸಹಿತ ಹಲವು ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ ಖಲೀಲ್ ಕಲ್ಲಡ್ಕದಲ್ಲಿ ಉಂಟಾಗುತ್ತಿದ್ದ ಗಲಾಟೆಗೆ ಈತನೇ ಪ್ರಮುಖನಾಗಿದ್ದ. ಈತನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದ್ದು, ಇತ್ತೀಚಿಗೆ ಈತನನ್ನು ಗಡಿಪಾರು ಕೂಡ ಮಾಡಲಾಗಿತ್ತು. ಕಲ್ಲಡ್ಕದಲ್ಲಿ ಹಿ.ಜಾ.ವೇ.ಮುಖಂಡ ರತ್ನಾಕರ ಶೆಟ್ಟಿಯವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಈತನಿಗೆ ಗಡಿಪಾರು ನಡೆದಿತ್ತು.