ಬಂಟ್ವಾಳ:ಇಲ್ಲಿನ ವಾಮದಪದವು ಶ್ರೀ ಶಾರದೋತ್ಸವ ಸಮಿತಿ ಮತ್ತು ಬಸ್ತಿಕೋಡಿ ತ್ರಿವೇಣಿ ಕಲಾವೃಂದ ಹಾಗೂ ಮಾವಿನಕಟ್ಟೆ ಗೆಳೆಯರ ಬಳಗ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಾಮದಪದವಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬುಧವಾರ ಉಚಿತ ಅಯುಷ್ಮಾನ್ ಕಾರ್ಡ್ ವಿತರಿಸಿದರು.
ಪ್ರಮುಖರಾದ ಸಿ.ಅನಂತ್ ಪೈ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಯತೀಶ್ ಕುಮಾರ್ ಶೆಟ್ಟಿ, ಪ್ರಮುಖರಾದ ಅಮ್ಮು ರೈ ಹರ್ಕಾಡಿ, ಪ್ರಕಾಶ್ ಗಟ್ಟಿ, ಜಗದೀಶ್ ಕೊಯಿಲ, ಪದ್ಮನಾಭ ಸಾವಂತ್ ಮತ್ತಿತರರು ಇದ್ದರು.
