ಮಂಗಳೂರು: ಸರಯೂ ಯಕ್ಷ ಬಳಗ ಕೋಡಿಕಲ್ಇದರ ವತಿಯಿಂದ ಸೆ. 26 ರಂದು ಶನಿವಾರ ನಡೆದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪೊಳಲಿ ವೆಂಕಟೇಶ್ ನಾವಡ ಅವರನ್ನು ಸರಯೂ ಯಕ್ಷ ಬಳಗಕೋಡಿಕಲ್ ಇವರ ವತಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗಿರಿಧರ ಭಟ್,ಡಾ.ಸತ್ಯಕೃಷ್ಣ ಭಟ್ ಹಾಗೂ ಜನಾರ್ಧನ ಅಮ್ಮುಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಂತರ ಮಧ್ಯಾಹ್ನ 2.30 ರಿಂದ ಬಸವ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ರವಿ ಅಲೆವೂರಾಯ ವರ್ಕಾಡಿ ನಿರ್ದೇಶನದಲ್ಲಿ ” ಸತ್ಯ ನಾರಾಯಣ ವೃತ ಮಹಾತ್ಮೆ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
