ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ನಾವೂರ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿ ತಯಾರಿ ಸಭೆಯು  ಸೆ1ರಂದು  ಅಂಬೇಡ್ಕರ್ ಭವನದಲ್ಲಿ   ಬಿ ರಮಾನಾಥ ರೈಯವರ ನೇತೃತ್ವದಲ್ಲಿ ನೆಡೆಯಿತು. ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ರೈ ಯವರು ಕರೆಯಿತ್ತರು.

WhatsApp Image 2020-09-01 at 9.23.38 PMಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚುನಾವಣೆ ಸಲಹಾ ಸಮಿತಿ ಸದಸ್ಯರಾದ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಜಗದೀಶ್ ಕೊಯಿಲ, ಜನಾರ್ದನ ಚೆಂಡ್ತಿಮಾರ್, ಸಂಪತ್ ಕುಮಾರ್ ಶೆಟ್ಟಿ, ಮೊಹಮ್ಮದ್ ಸಂಗಬೆಟ್ಟು, ಪ್ರಶಾಂತ್ ಕುಲಾಲ್, ವಲಯ ಅಧ್ಯಕ್ಷ ಪುಷ್ಪರಾಜ್ ನಾವೂರ ಮುಖಂಡರಾದ ಸದಾನಂದ ನಾವೂರ, ಬೇಬಿ ಸುವರ್ಣ, ಪದ್ಮಶೇಖರ್ ಜೈನ್ ಬೀದಿ, ಏಜೇ ಮೊರಾಸ್, ಸುವರ್ಣ ಕುಮಾರ್ ಜೈನ್, ಫಾರೂಕ್ ನಾವೂರ, ಕರೀಮ್ ಪೆರ್ಲ, ಹಕೀಮ್ ಪಾಂಗೊಡಿ, ದಿನೇಶ್ ಪೂಜಾರಿ, ಗಿರಿಜಾ ಪೂಜಾರಿ, ಗುಲಾಬಿ ಚಂದಪ್ಪ ನಾಯ್ಕ, ಹಮೀದ್ ಮೈಂದಾಲ, ಶಂಕರ್ ಕಾಲೊನಿ, ವಿಜಯ ಕಾಲೊನಿ, ಸತೀಶ್ ಮಲೇಕೊಡಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *