ಬಂಟ್ವಾಳ: ತಾಲೂಕಿನ ಪಲ್ಲಮಜಲು ಗ್ರಾಮದ ಮಿತ್ತಬೈಲು ಎಂಬಲ್ಲಿಯ ಹಯಾತುಲ್ ಇಸ್ಲಾಂ ಮದರಸ ದ ಪರಿಸರದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಆಶ್ರಯದಲ್ಲಿ ಭಾನುವಾರ ಸುಮಾರು 50 ಸಸಿಗಳನ್ನು ನೆಡಲಾಯಿತು.

ಕ್ಲಬ್ಬಿನ ಅಧ್ಯಕ್ಷ ರೋ ಪದ್ಮನಾಭ ರೈ, ಝೋನಲ್ ಲೆಫ್ಟಿನೆಂಟ್ ಜಯರಾಜ್ ಯಸ್ ಬಂಗೇರ, ಕಾರ್ಯದರ್ಶಿ ಕಿಶೋರ್, ರೋಟೋರಿಯನ್ಸ್ ಸುಂದರ್ ಬಂಗೇರ , ದಿವಾಕರ್ ಶೆಟ್ಟಿ, ಉಮೇಶ್ ಮೂಲ್ಯ, ಕೇಶವ ನಾಯ್ಕ್, ಜ್ಯೋತಿಂದ್ರ ಶೆಟ್ಟಿ, ಗಣೇಶ್ ಸಾಲಿಯಾನ್, ಗಣೇಶ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ನಾರಾಯಣ್ ಪೆರ್ನೆ, ಸುಕುಮಾರ್ ಬಂಟ್ವಾಳ್,
ಮದರಸದ ಅಧ್ಯಕ್ಷ ಇಸ್ಮಾಯಿಲ್ ಉಫಾ, ಕಾರ್ಯದರ್ಶಿ ಶಂಶುದ್ದೀನ್ ಫಯಾಜ್, ಸದರ್ ಉಸ್ತಾದ್ ಇಸ್ಮಾಯಿಲ್ ಅಝ್ ಹ್ಯಾರಿ ಉಪಸ್ಥಿತಿ ಇದ್ದರು.
