ಬಂಟ್ವಾಳ : ಪುದು ಗ್ರಾಮದ ಕಡೆಗೋಳಿ – ಪೊಳಲಿ ಸಂಪರ್ಕ ರಸ್ತೆಯ ನಡುಬೈಲು ಎಂಬಲ್ಲಿ ಬಹುದಿನದ ಬೇಡಿಕೆಯಾದ ನೂತನ ಬಸ್ ತಂಗುದಾಣ ಹಾಗೂ  ಹಿಂದೂ ಜಾಗರಣಾ ವೇದಿಕೆ ಕಲಾಸಂಗಮ ಘಟಕದ    ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.    IMG-20200815-WA0131

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘಚಾಲಕರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಯವರು ಬಸ್ ತಂಗುದಾಣ ಹಾಗೂ ಹಿ.ಜಾ.ವೇ.ಯ ಘಟಕವನ್ನು ಉದ್ಘಾಟಿಸಿ ಮಾತನಾಡಿ, ದೇಶದ  ಯುವಜನತೆಯ ಶಕ್ತಿ ವ್ಯರ್ಥವಾಗಬಾರದು ಅವರು ಸಂಸ್ಕಾರಯುತರಾಗಿ  ಸಂಘಟಿತರಾಗಬೇಕು ಎಂದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ  ಬೌದ್ಧಿಕ್ ಪ್ರಮುಖ್ ನರಸಿಂಹ ಮಾಣಿ , ಪ್ರಾಂತ ಕಾರ್ಯಕಾರಿಣಿ ಸದಸ್ಯ ರವಿರಾಜ್ ಬಿ. ಸಿ. ರೋಡ್ , ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಜಗದೀಶ್ ನೆತ್ತರಕೆರೆ , ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಬೆಂಜನಪದವು , ವಕೀಲರಾದ  ರಾಜೇಶ್ ಬೊಳ್ಳುಕಲ್ಲು , ಕಿಶೋರ್ ಕುಮಾರ್ ಮಂಗಳೂರು , ಬಂಟ್ವಾಳ ತಾಲೂಕು ಪ್ರದಾನ ಕಾರ್ಯದರ್ಶಿ ಯೋಗೀಶ್ ಕುಮುಡೇಲು  ,ತುಂಬೆ ವಲಯ ಪ್ರದಾನ ಕಾರ್ಯದರ್ಶಿ ಲೋಲಾಕ್ಷ ,  ನಡುಬೈಲು ಘಟಕದ ಅಧ್ಯಕ್ಷ ಸುರೇಶ ನಡುಬೈಲು , ಕಾರ್ಯದರ್ಶಿ ಲಿಖಿತ್ ಕುಮಾರ್ ಗೋವಿನತೋಟ ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *