ಬಂಟ್ವಾಳ:  ಗುರುಗಳ ಪವಿತ್ರವಾದ  ಚಾತುರ್ಮಾಸ ನಡೆಯುತ್ತಿರುವ ಸಂದರ್ಭದಲ್ಲಿಯೇ ದೇಶ ಹಾಗೂ ಧರ್ಮದ್ರೋಹಿಗಳು ಜಗದ್ಗುರು  ಶ್ರೀ  ಶಂಕರಾಚಾರ್ಯರ ಪ್ರತಿಮೆಯನ್ನು ಭಗ್ನಗೊಳಿಸುವಂತಹ ಮತ್ತು ಈ ಮೂಲಕ ಸಮಾಜದಲ್ಲಿ ಅಶಾಂತಿ ಕದಡುವಂತಹ ಕೃತ್ಯವೆಸಗಿರುವುದನ್ನು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ  ಬ್ರಾಹ್ಮಣ ಸಭಾ,ಬಂಟ್ವಾಳ – ವಿಟ್ಲ ವಲಯ ಖಂಡಿಸಿದೆ.   ಶೃಂಗೇರಿ ಮಠವು ನಮ್ಮಂತಹ ಭಕ್ತಬಾಂಧವರಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿದ್ದು, ನಮ್ಮ ಸಮಾಜದ ಅಭಿವೃದ್ಧಿಯಲ್ಲಿಯು ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ.ಕಿಡಿಗೇಡಿಗಳ ಈ ಕೃತ್ಯ ಶ್ರೀ ಮಠದ ಭಕ್ತರ ಭಾವನೆಗಳಿಗೆ ತೀವ್ರವಾದ ಘಾಸಿಯುಂಟಾಗಿರುತ್ತದೆ ಎಂದು ಶ್ರೀ  ಸುಬ್ರಹ್ಮಣ್ಯ ಸ್ಥಾನಿಕ  ಬ್ರಾಹ್ಮಣ ಸಭಾ,ಬಂಟ್ವಾಳ – ವಿಟ್ಲ ವಲಯ ಸಮಿತಿ ತಿಳಿಸಿದೆ.

ಸರಕಾರವು ಈ ಘಟನೆಯ ತೀವ್ರತೆಯನ್ನು  ಅರ್ಥ ಮಾಡಿಕೊಂಡು  ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮವನ್ನು ಕೈಗೊಳ್ಳುವುದರ ಮೂಲಕ ಸಮಾಜ ಹಾಗೂ ಧರ್ಮದ್ರೋಹಿಗಳಿಗೆ  ಸೂಕ್ತವಾದ ಶಿಕ್ಷೆಯನ್ನು  ನೀಡಬೇಕೆಂದು ಒತ್ತಾಯಿಸಿ ಶುಕ್ರವಾರ ಸಮಿತಿ ಪದಾಧಿಕಾರಿಗಳು ಬಂಟ್ವಾಳ ತಹಶೀಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿ ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *