ಬಂಟ್ವಾಳ: ಇಲ್ಲಿನ ಎಸ್ .ವಿ.ಎಸ್. ದೇವಳ ಶಾಲೆಯಲ್ಲಿ ಕಲಿತು ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಕಾಲಿನಲ್ಲಿ ಬರೆದು ರಾಜ್ಯದ ಗಮನ ಸೆಳೆದ ಕೌಶಿಕ್ ಆಚಾರ್ಯ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಶಾಲಾ ಆಡಳಿತ ಮಂಡಳಿ ವತಿಯಿಂದ ಅತನನ್ನು ಸನ್ಮಾನಿಸಲಾಯಿತು.
ಈ ವೇಳೆ ಸಂಚಾಲಕ ಎ.ಗೋವಿಂದ ಪ್ರಭು, ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ ಶೆಣೈ, ಪ್ರವೀಣ್ ಕಿಣಿ ಮತ್ತು ಅರ್ಜುನ್ ಭಂಡಾರ್ಕರ್ ಅವರ ನಿಯೋಗ ಕೌಶಿಕ್ ಮನೆಗೆ ತೆರಳಿ ಅಭಿನಂದಿಸಿತು.
