ಬಂಟ್ವಾಳ: ಇಲ್ಲಿನ ವಾಮದಪದವು ಸಮೀಪದ ದಂಡೆ ನಿವಾಸಿ, ಹಿರಿಯ ಬಿಜೆಪಿ ಮುಖಂಡ ಕೖಷ್ಣ ಶೆಟ್ಟಿ ದಂಡೆ (86) ಇವರು ಅಸೌಖ್ಯದಿಂದ ಶುಕ್ರವಾರ ಮುಂಜಾನೆ ಸ್ವಗೖಹದಲ್ಲಿ ನಿಧನರಾದರು. ಮೃತರ ಪತ್ನಿ, ಪುತ್ರ ರಾಮಚಂದ್ರ ಶೆಟ್ಟಿ ದಂಡೆ ಸಹಿತ , ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಅಗಲಿದ್ದಾರೆ.
ಪ್ರಗತಿಪರ ಕೖಷಿಕರಾಗಿ, ಬೀಡಿ ಗುತ್ತಿಗೆದಾರರಾಗಿ, ಆರ್ ಎಸ್ ಎಸ್ ಕಾಯ೯ಕತ೯ರಾಗಿ, ಬಿಜೆಪಿ ಹಿರಿಯ ಮುಖಂಡರಾಗಿ, ದಂಡೆ ಶ್ರೀ ಮಹಾಗಣಪತಿ ದೇವಸ್ಥಾನ, ಕರೆಂಕಿ ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನ ಅಭಿವೖದ್ಧಿಗೆ ಶ್ರಮಿಸಿದ್ದರು. ಮೖತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಮನೆ ಸಮೀಪ ನೆರವೇರಿತು.

