ಪೊಳಲಿ: ಪೊಳಲಿ ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಹಭಾಗಿತ್ವದಲ್ಲಿ ದೇವರನಾಡು ಪಡ್ಯಪ್ ಪುಳಿನಾಪುರದಲ್ಲಿ ಗಿಡಗಳನ್ನು ನೆಡುವ ಮೂಲಕ ಗುರುವಾರ ಚಾಲನೆ ನೀಡಲಾಯಿತು.ದೇವಳದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಬಂಟ್ವಾಳ ಅರಣ್ಯಾಧಿಕಾರಿಗಳು ಸುಮಾರು 2000 ವಿವಿಧ ಜಾತಿಯ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .
ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ಮಾಧವ ಭಟ್ , ಮಾಧವ ಮಯ್ಯ, ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತುಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರ ಯು. ತಾರನಾಥ ಆಳ್ವ, ಬಂಟ್ವಾಳ ವಲಯ ಅರಣ್ಯಧಿಕಾರಿ ರಾಜೇಶ್ ಬಳಿಗಾರ, ಉಪ ಅರಣ್ಯಧಿಕಾರಿ ಪ್ರೀತಮ್, ಅರಣ್ಯ ರಕ್ಷಕರಾದ ವಿನಯ ಮತ್ತು ರೇಖಾ, ವೀಕ್ಷಕ ಭಾಸ್ಕರ್, ಚಾಲಕ ಜಯರಾಮ , ಕೃಷ್ಣರಾಜ್ ಮಾರ್ಲ, ಪೊಳಲಿ ವ್ಯ.ಸೇ,ಸಹಕಾರಿ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಸುಬ್ರಾಯ ಕಾರಂತ, ತಾ.ಪಂ.ಸದಸ್ಯ ಯಶವಂತ ಪೂಜಾರಿ,ಕಿಶೋರು ಪಲ್ಲಿಪಾಡಿ, ಲೋಕೇಶ್ ಭರಣ,ದೀಕ್ಷತ್ ರೈ ಹಾಗೂ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು




