ಬಂಟ್ವಾಳ, : ಮಾಣಿ ಗ್ರಾಮ ವ್ಯಾಪ್ತಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ 1.53 ಕೋ.ರೂ.ಅನುದಾನದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಗ್ರಾಮ ವ್ಯಾಪ್ತಿಯಲ್ಲಿ ನಡೆಯಿತು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದರು. ೧ ಕೋ.ರೂ.ಗಳ ದಡಿಕೆಮಾರ್-ಬಾಯಿಲ ಕಾಂಕ್ರೀಟ್ ರಸ್ತೆ ಉದ್ಘಾಟನೆ ಸೇರಿದಂತೆ ಭರಣಿಕೆರೆ-ಹರಿಯಕೋಡಿ ರಸ್ತೆ ೧೦ ಲಕ್ಷ ರೂ, ಕಾಯರಡ್ಕ ರಸ್ತೆ ೧೦ ಲಕ್ಷ ರೂ, ನೆಲ್ಲಿ-ಪಲ್ಲತ್ತಿಲ್ಲ ರಸ್ತೆ ೧೦ ಲಕ್ಷ ರೂ, ಪಟ್ಲಕೋಡಿ ರಸ್ತೆ ೫ ಲಕ್ಷ ರೂ, ಶಂಭುಗ-ನೆಲ್ಲಿ ರಸ್ತೆ ೫ ಲಕ್ಷ ರೂ, ಬಾಯಿಲ-ಶಂಭುಗ ರಸ್ತೆ ೫ ಲಕ್ಷ ರೂ. ಹಾಗೂ ಕಂಬ್ಲಗುತ್ತು ಕಾಲುಸಂಕ ೮.೫೦ ಲಕ್ಷ ರೂ.ಗಳ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ. ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಣಿ ಗ್ರಾ.ಪಂ.ಅಧ್ಯಕ್ಷೆ ಮಮತಾ ಶೆಟ್ಟಿ, ಉಪಾಧ್ಯಕ್ಷೆ ಸಂಪಾವತಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಉಪಾಧ್ಯಕ್ಷ ರೊನಾಲ್ಡ್ ಡಿಸೋಜಾ, ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ, ಗ್ರಾ.ಪಂ.ಸದಸ್ಯರಾದ ಗಣೇಶ್ ರೈ ಮಾಣಿ, ನಾರಾಯಣ ಶೆಟ್ಟಿ ತೋಟ, ಪ್ರಮುಖರಾದ ಹರೀಶ್ ಮಾಣಿ, ನರಸಿಂಹ ಶೆಟ್ಟಿ, ಭರತ್ ಶೆಟ್ಟಿ, ರಮಾನಾಥ ರಾಯಿ, ಇತರ ಜನಪ್ರತಿನಿಧಿಗಳು, ಎಂಜಿನಿಯರ್ಗಳು, ಸ್ಥಳೀಯ ಮುಂದಾಳುಗಳು ಉಪಸ್ಥಿತರಿದ್ದರು.
Attachments area
