ಮಂಗಳೂರು: ಮಹಾನಗರ ಪಾಲಿಕೆಗೆ ಕೆಎಎಸ್ ಅಥವಾ ಐಎಎಸ್ ಕ್ಯಾಡರ್ನವರನ್ನೇ ಆಯುಕ್ತರನ್ನಾಗಿ ಮುಖ್ಯಮಂತ್ರಿಯವರು ಶೀಘ್ರ ನೇಮಕ ಮಾಡಲಿದ್ದಾರೆ ಎಂದು ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ನಮ್ಮ ಇಲಾಖೆಯವರಲ್ಲ. ಅವರು ಲೆಕ್ಕಪತ್ರ ಇಲಾಖೆಯವರು. ಅವರನ್ನು ಅವರ ಮೂಲ ಇಲಾಖೆಗೆ ವರ್ಗಾಯಿಸಿದಾಗ, ಅವರು ಸ್ಟೇ ತಂದರು. ಈ ನಡುವೆ ಮುಖ್ಯಮಂತ್ರಿ ಕೆಎಎಸ್ ಅಧಿಕಾರಿಯೊಬ್ಬರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಯಿತು. ಗೊಂದಲದಿಂದಾಗಿ ಅವರು ಅಧಿಕಾರ ವಹಿಸಲಿಲ್ಲ. ಇನ್ನು ಮುಂದೆ ಕ್ಯಾಡರ್ನವರನ್ನೇ ನೇಮಕ ಮಾಡಲಾಗುವುದು.

