ಉಡುಪಿ : ರಂಜಾನ್ ಮಾಸದ ಈ ಸಮಯದಲ್ಲಿ ಉಪನ್ಯಾಸಕ, ಸಾಮಾಜ ಸೇವಕ ರಫೀಕ್ ಖಾನ್ ರವರು ಉಡುಪಿ ಸಮೀಪದ ಕಟಪಾಡಿ, ಮಟ್ಟು, ಬ್ರಹ್ಮಾವರದಲ್ಲಿ ಇರುವ ಬಡ ಕುಟುಂಬದ ಸದಸ್ಯರಿಗೆ ತರಕಾರಿ, ದಿನಬಳಕೆಯ ಸಾಮಾಗ್ರಿಗಳನ್ನು ಅದೇ ರೀತಿ ಅತೀ ಅಗತ್ಯ ಇರುವ ಜನರಿಗೆ ನಗದು ರೂಪದಲ್ಲಿ ಸಹಾಯ ಹಸ್ತ ಚಾಚಿದರು.

ಜೇಸಿ ಉಡುಪಿ ಸಿಟಿ ಯ ಪೂವಾ೯ದ್ಯಕ್ಷರಾದ ಇವರು ಸುಮಾರು 100 ಕುಟುಂಬಗಳಿಗೆ ಸಹಾಯ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
