ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಿಂದ ಝಾರ್ಖಂಡ್ಗೆ ತೆರಳಲು ಮುಂದಾಗಿ  ಬಂಟವಾಳ ಬಂಟರ ಭವನದಲ್ಲಿ ಕಳೆದ ಎರಡು ದಿನದಿಂದ ತಂಗಿರುವ ಕಾರ್ಮಿಕರಿಗೆ ಬಂಟ್ವಾಳ ತಾಲೂಕಾಡಳಿತದ ಮೂಲಕ ಗುರುವಾರ  ಮೊಬೈಲ್ ಎಟಿಎಂ ವ್ಯವಸ್ಥೆ ಕಲ್ಪಿಸಲಾಯಿತು.       IMG-20200514-WA0042

ಬಂಟರ ಭವನದಲ್ಲಿ ತಂಗಿರುವ ನೂರಾರು ಕಾರ್ಮಿಕರು ಇದರ ಸದುಪಯೋಗವನ್ನು ಪಡೆದುಕೊಂಡರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಿದರು.ಶಾಸಕರ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಆಡಳಿತ, ಪೋಲಿಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿ- ಸಿಬ್ಬಂದಿ ವರ್ಗ ಮಂಗಳವಾರ ಮಧ್ಯರಾತ್ರಿಯಿಂದಲೇ ಕಾರ್ಮಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿದರು.IMG-20200514-WA0043

ಗುರುವಾರವು ಶಾಸಕ ರಾಜೇಶ್ ನಾಯ್ಕ್ ಅವರು ಬಂಟರ ಭವನಕ್ಕೆ ಭೇಟಿ ನೀಡಿ ಕಾರ್ಮಿಕರ ಯೋಗ ಕ್ಷೇಮವನ್ನು ವಿಚಾರಿಸಿದರು.ತಹಶೀಲ್ದಾರ್ ರಶ್ಮಿ.ಎಸ್.ಆರ್, ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ,ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ,ಪಕ್ಷದ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು,ರಮಾನಾಥ ರಾಯಿ ಮೊದಲಾದವರಿದ್ದರು.

ಬಂಟವಾಳದ ಬಂಟರ ಭವನವನ್ನು ಕಾರ್ಮಿಕರ ವಾಸ್ತವ್ಯಕ್ಕಾಗಿ ನೀಡಿ ಸಹಕರಿಸಿದ  ಸಂಘದ ಅಧ್ಯಕ್ಷ ನಗ್ರಿ ವಿವೇಕ್ ಶೆಟ್ಟಿ , ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ  ಹಾಗೂ ಎಲ್ಲ ಪದಾಧಿಕಾರಿಗಳಿಗೆ ಈ ಸಂದರ್ಭ ಶಾಸಕರು ಕೃತಜ್ಞತೆ ಸಲ್ಲಿಸಿದರು. ಮಂಗಳವಾರ ರಾತ್ರಿ ಝಾರ್ಖಂಡ್ ಮೂಲದ ಕಾರ್ಮಿಕರು ಪಾದಯಾತ್ರೆ ಮೂಲಕ ಊರಿಗೆ ತೆರಳಲು ಮುಂದಾಗಿದ್ದರು.ಇವರನ್ನು ಬಂಟವಾಳ ಬಂಟರಭವನ ಬಳಿ ತಡೆದು ಮನವೊಲಿಸಿ ಇಲ್ಲಿಯೆ ಉಳಿದು ಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿತ್ತು.

By suddi9

Leave a Reply

Your email address will not be published. Required fields are marked *