ಬಂಟ್ವಾಳ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿ.ಸಿ.ರೋಡು ಶಾಖೆಯ ವತಿಯಿಂದ ಸೋಮವಾರ ಕೋವಿಡ್ – 19 ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಂಟ್ವಾಳ ಭಾಗದ ಬಿ.ಸಿ.ರೋಡ್, ತುಂಬೆ, ಕಳ್ಳಿಗೆ ಪ್ರದೇಶದಲ್ಲಿರುವ 40 ವಲಸೆ ಕಾರ್ಮಿಕರ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ವಿ.ಕೆ.ಸುಕುಮಾರ್, ರೀಜನಲ್ ಮೇನೆಜರ್ ದಿನೇಶ್ ಅರೂರ, ಶಾಖಾ ಮುಖ್ಯ ವ್ಯವಸ್ಥಾಪಕ ಟಿ.ವಿ. ರವೀಂದ್ರ ಕುಮಾರ್, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲಿನಿ, ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನ, ಉಪಾಧ್ಯಕ್ಷ ಪುರುಷ ಸಾಲಿಯಾನ್, ಸದಸ್ಯ ಮಧುಸೂದನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
