ಮಂಗಳೂರು: ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ ಜನವೋ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿರುವ ನಾಗರಿಕರು.
ಅಗತ್ಯ ವಸ್ತುಗಳನ್ನು ಖರೀದಿಗೆ ಸಮಯದ ನಿಗದಿ ನೀಡಿದ್ದ ಜಿಲ್ಲಾಡಳಿತ ನಗರ ಪ್ರದೇಶದಲ್ಲಿ ನಡೆದುಕೊಂಡು ಹೋಗಿ ಅಗತ್ಯ ವಸ್ತುಗಳನ್ನು ಕರೀದಿಸುವಂತೆ ಸೂಚಿಸಿ ಆದೇಶ ನೀಡಿತ್ತು. ಆದರೆ ಇಂದು ಕಿನ್ನಿಗೋಳಿಯಲ್ಲಿ ಜಿಲ್ಲಾಡಳಿತದ ಆದೇಶ ಸಂಪೂರ್ಣ ಉಲ್ಲಂಘನೆಯಾಗಿದೆ. ಜನರು ಖಾಸಗಿ ವಾಹನದಲ್ಲಿ ಬಂದು ಗುಂಪು ಗುಂಪಾಗಿ ವಸ್ತುಗಳ ಕರೀದಿ ಮಾಡುವ ದೃಶ್ಯ ಕಂಡುಬಂತು.
