ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಕಾರ್ಯಾಚರಿಸುವ ಶುಭ ಬೀಡಿ ಸಂಸ್ಥೆಯ ಮಾಲಕ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ತನ್ನ 1,500 ಬೀಡಿ ಕಾರ್ಮಿಕರಿಗೆ ತಲಾ 25 ಕೆ.ಜಿ ಅಕ್ಕಿ ಮತ್ತು ಧನಸಹಾಯವನ್ನು ವಿತರಿಸಲಾಯಿತು.
ಮಂಗಳವಾರ ಸಂಸ್ಥೆಯ ವಠಾರದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಾರ್ಮಿಕರಿಗೆ ಅಕ್ಕಿ ಮತ್ತು ಧನಸಹಾಯ ವಿತರಿಣೆಗೆ ಚಾಲನೆ ನೀಡಿ ಪ್ರಸಕ್ತ ದಿನದಲ್ಲಿ ಬೀಡಿ ಕಾರ್ಮಿಕರ ಕಷ್ಟಕ್ಕು ಸ್ಪಂದಿಸುವ ಸಂಸ್ಥೆಯ ಮಾಲಕ ಸೇಸಪ್ಪ ಕೋಟ್ಯಾನ್ ಅವರ ಕಾರ್ಯವನ್ನು ಅಭಿನಂದಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ,ಸಂಸ್ಥೆಯ ಮಾಲಕ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ದಂಪತಿ ಮತ್ತು ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.
