ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ,  ಪುರಸಭೆ ಮತ್ತು ಅಗ್ನಿಶಾಮಕದಳ, ಸಹಕಾರದೊಂದಿಗೆ ರಾಸಾಯನಿಕ ದ್ರಾವಣ ಸಿಂಪಡಣಾ ಕಾರ್ಯ ಮಂಗಳವಾರ ಪಾಣೆಮಂಗಳೂರು, ಬಂಟ್ವಾಳ ನಗರದ  ವಿವಿಧ ಭಾಗಗಳಲ್ಲಿ ನಡೆಯಿತು.IMG_20200407_135543

ಪಾಣೆಮಂಗಳೂರು ನಗರದ ಸುತ್ತಮುತ್ತ,ಬಂಟ್ವಾಳ ಬಡ್ಡಕಟ್ಟೆಯ ಮೀನು ಮಾರ್ಕೆಟ್ ರಸ್ತೆ, ವಿ.ಪಿ.ರಸ್ತೆ,ತ್ಯಾಗರಾಜ ರಸ್ತೆ, ರಥಬೀದಿ,ಕೊಟ್ರಮಣಗಂಡಿ, ಜಕ್ರಿಬೆಟ್ಟು ಮಾದಲಾದೆಡೆ     ಫಿನಾಯಿಲ್ ಮತ್ತು ಬ್ಲೀಚಿಂಗ್ ಪೌಡರ್ ರಾಸಾಯನಿಕವನ್ನು ಸಿಂಪಡಣೆ ನಡೆಯಿತು. ನಾಯಿಲ್,  ಬ್ಲೀಚಿಂಗ್ ಪೌಡರ್, ನೀರು ಇದಕ್ಕೆ ಬಳಕೆಯಾಗಿತ್ತು.

ಈ ಸಂದರ್ಭ  ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಪುರಸಭೆ ಮುಖ್ಯಾಧಿಕಾರಿ ಲೀನಾ  ಬ್ರಿಟ್ಟೊ ಸೂಚನೆಯಂತೆ ಪುರಸಭೆಯ ಪರಿಸರ ಸಹಾಯಕ ಇಕ್ಬಾಲ್, ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ ರೋ.ಪ್ರಕಾಶ್ ಕಾರಂತ ಅವರ ತೋಟದ ಕಾರ್ಮಿಕರು ಪ್ರತ್ಯೇಕವಾಗಿ ಸಿಂಪಡಣಾ  ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗಾ ಪದಾಧಿಕಾರಿಗಳಾದ ನಾರಾಯಣ ಹೆಗ್ಡೆ,ಸದಾಶಿವ ಬಾಳಿಗಾ ,ಡಾ.ನರೇಂದ್ರ ಆಚಾರ್ಯ  ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *