ಬಂಟ್ವಾಳ: ಕೊರೊನೊ ಜನತಾಕರ್ಪ್ಯೂ ನ ಹಿನ್ನೆಲೆಯಲ್ಲಿ ಜನರಿಗೆ ಸಹಕಾರ ನೀಡುವ ಉದ್ದೇಶದಿಂದ ಕಲ್ಲಡ್ಕ ರೈತರ ಸೇವಾಸಹಕಾರಿ ಸಂಘದ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜನರ ಅನುಕೂಲದ ದೃಷ್ಟಿಯಿಂದ ಸಂಘದ ಕಚೇರಿ ಬೆಳಿಗ್ಗೆ ಗಂಟೆ 8 ರಿಂದ ಮಧ್ಯಾಹ್ನ 12 ಗಂಟೆಯ ವರಗೆ ತೆರೆದಿರುತ್ತದೆ. ಈ ಸಮಯದಲ್ಲಿ ಸಂಘದ ಕಚೇರಿಯ ಅಧೀನದಲ್ಲಿರುವ ರೇಷನ್ ಅಂಗಡಿಗಳು ಕೂಡಾ ತೆರೆದಿದ್ದು, ಜನರು ಈ ಸಮಯದಲ್ಲಿ  ರೇಷನ್ ಪಡೆಯಬಹುದು.
ಕಲ್ಲಡ್ಕ ದ ಲ್ಲಿ ರೈತರ ಸೇವಾಸಹಕಾರಿ ಸಂಘದ  ಮಾತೃಸಂಸ್ಥೆಯಿದ್ದು ಉಳಿದಂತೆ ವೀರಕಂಭ, ಬೋಳಂತೂರು ಹಾಗೂ ಅಮ್ಟೂರು ಈ ಮೂರು ಕಡೆಗಳಲ್ಲಿಯೂ ಒಂದೇ ರೀತಿಯ ಸಮಯ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *