ಪೊಳಲಿ: ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಒಂದು ತಿಂಗಳ ಜಾತ್ರಾ ಮಹೋತ್ಸವಕ್ಕೆ ಉಳಿಪಾಡಿಗುತ್ತಿನಿಂದ ಶನಿವಾರ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿತು.
ಉಳಿಪಾಡಿ ಗುತ್ತಿನಲ್ಲಿ ದೈವಗಳ ಪರ್ವ ನಡೆದು ಮಳಲಿ ಸೀಮೆಯವರು ಹಾಗೂ ಊರಿನವರು ಸೇರಿಕೊಂಡು ತೆಂಗಿನ ಸೋಗೆಯ ಸೂಟೆ ವಾದ್ಯ ಘೋಷದೊಂದಿಗೆ ಭಂಡಾರವು ಪೊಳಲಿಗೆ ಆಗಮಿಸಿದಾಗ ಅಮ್ಮುಂಜೆ ಗುತ್ತಿನವರು ವಾದ್ಯ ಘೋಷ್ಟಿಯೊಂದಿಗೆ ಸಾವಿರ ಸೀಮೆಯವರೊಂದಿಗೆ ದೇವಸ್ಥಾನದ ಬಡಗು ಬದಿಯಲ್ಲಿರುವ ಕೋಳಿಕುಂಟ ಗದ್ದೆಗೆ ಹೋಗಿ ಅಲ್ಲಿ ಭಂಡಾರವನ್ನು ಎದುರುಗೊಂಡು ಸಂಭ್ರ್ರಮದಿಂದ ಸ್ವಾಗತಿಸಲಾಯಿತು. ಆಮೇಲೆ ದೇವಸ್ಥಾನದಲ್ಲಿಗುತ್ತಿನವರು, ಸ್ಥಾನದವರು,ಆರ್ಚಕರು ಇದ್ದು ಪ್ರಾರ್ಥಿಸಿ ಧ್ವಜ ಪಟದೊಂದಿಗೆ ದೇವರ ಬಲಿ ಹೊರಟು ಬಂದು ದ್ವಜಾರೋಹಣಗೊಳ್ಳತ್ತದೆ.
