ಬಂಟ್ವಾಳ:  ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ನುಸುಕಿನ ಜಾವ ನಿಧನರಾದ  ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ಅವರ ಪಾರ್ಥಿವ ಶರೀರದ   ಅಂತಿಮ ದರ್ಶನ ಪಡೆದರು.

IMG-20191210-WA0069 ಅಲ್ಪಕಾಲದ ಅಸೌಖ್ಯದಿಂದ ನಿಧನರಾದ ಜಿ.ಆನಂದ ಅವರ ಪಾರ್ಥಿವ ಶರೀರ ತುಂಬೆ ಖಾಸಗಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು ಬುಧವಾರ ಬೆಳಿಗ್ಗೆ 10.30 ವೇಳೆ ಇಲ್ಲಿಂದ ಬಂಟ್ವಾಳದ ಅವರ ನಿವಾಸಕ್ಕೆ ಅಂತಿಮ ಯಾತ್ರೆ ನಡೆಯಲಿದೆ.    ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ಸಂಜೆಯೇ ತುಂಬೆ ಆಸ್ಪತ್ರೆ ಗೆ     ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶೃದ್ದಾಂಜಲಿ ಅರ್ಪಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸೋಮಪ್ಪ ಕೋಟ್ಯಾನ್ ತುಂಬೆ, ಗಣೇಶ್ ಸುವರ್ಣ ತುಂಬೆ, ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *