ಬಂಟ್ವಾಳ: ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಉಚಿತ ರಕ್ತದ ಒತ್ತಡ ಹಾಗೂ ಸಕ್ಕರೆ ಕಾಯಿಲೆ ಪರೀಕ್ಷೆ ಕಾರ್ಯಕ್ರಮ ವೀರಕಂಬ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆಯಿತು.
ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇದರ ಉಪಕೇಂದ್ರ ವೀರಕಂಬ ವ್ಯಾಪ್ತಿಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜ್ಯೋತಿ ಕೆ.ಎನ್,ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಾಲಜಿಷ್ಟ್ ಹರಿಣಾಕ್ಷಿ ಜಿ ಎಸ್, ಆಪ್ತ ಸಮಾಲೋಚಕಿ ಮಾಲತಿ ಪಿ ಡಿ ,ಆಶಾ ಕಾರ್ಯಕರ್ತರಾದ ಲೀಲಾವತಿ, ಕೋಮಲಾಕ್ಷಿ , ಸ್ನೇಹಲತಾ ಶೆಟ್ಟಿ, ಪರೀಕ್ಷಾ ಕಾರ್ಯಕ್ರಮ ನಡೆಸಿದರು. ಮಜಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಹಾಗೂ ಶಿಕ್ಷಕಿಯರು ಸಹಕರಿಸಿದರು.
