ಮಳೆಯಿಂದಾಗಿ ಹಾನಿಗೀಡಾದ ರಸ್ತೆಗಳನ್ನು ಶೀಘ್ರ ವಾಗಿ ಪುನರ್ ನಿರ್ಮಿಸಲಾಗುವುದು : ರವೀಂದ್ರ ಕಂಬಳಿ
ತೀವ್ರ ವಾದ ಮಳೆ ಹಾಗು ನಿರ್ವಹಣಾ ಕೊರತೆ ಯಿಂದ ತೀರಾ ನಾದುರಸ್ತಿ ಯಲ್ಲಿದ್ದ ಕೊಟ್ಟಿಂಜ – ಕೊಡ್ಮಾಣ್ ಸಂಪರ್ಕ ರಸ್ತೆ ಗೆ ಸಂಸದ ನಳಿನ್ ಕುಮಾರ ಕಟೀಲು ರವರ ಅನುದಾನ 5 ಲಕ್ಷ ,ಜಿಲ್ಲಾ ಪಂಚಾಯತ್ ಸದಸ್ಯ ಅನುದಾನ 2ಲಕ್ಷ , ತಾಲೂಕು ಪಂಚಾಯತ್ ಸದಸ್ಯಗಣೇಶ್ ಸುವರ್ಣ ರ ಅನುದಾನ1 ಲಕ್ಷ ಮತ್ತು ಮೇರಮಜಲು ಪಂಚಾಯತ್ ಅನುದಾನ 1ಲಕ್ಷ ಒಟ್ಟು 9 ಲಕ್ಷ ರೂಪಾಯಿಗಳಿಂದ ಕಾಂಕ್ರೀಟಿಕರಣ ಗೊಳಿಸಿದ ರಸ್ತೆ ಯನ್ನು ಉದ್ಘಾಟನೆ ಗೊಳಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿಯವರು ಮುಂದಿನ ದಿನಗಳಲ್ಲಿ ಮಳೆಯಿಂದಾಗಿ ಹಾನಿಗೀಡಾದ ರಸ್ತೆಗಳನ್ನು ಶೀಘ್ರ ವಾಗಿ ಕಾಂಕ್ರೀಟಿಕರಣ ಗೊಳಿಸಿ ಶಾಶ್ವತ ಪರಿಹಾರ ಮಾಡಲಾಗುವುದು ಎಂದರು .
ಈ ಸಂದರ್ಭ ದಲ್ಲಿ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಮೇರಮಜಲು ಪಂಚಾಯತ್ ಅಧ್ಯಕ್ಷ ಸತೀಶ್ ನಾಯ್ಗ, ಮಾಜಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷೆ ಶೈಲಜಾ ಪಿ ಶೆಟ್ಟಿ , ಪಂಚಾಯತ್ ಸದಸ್ಯ ಪದ್ಮನಾಭ ಶೆಟ್ಟಿ , ಮಂಗಳೂರು ಮಂಡಲ ಬಿ ಜೆ ಪಿ ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ ,ಬಿ ಜೆ ಪಿ ಕೊಟ್ಟಿಂಜ ಬೂತ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಕೊಟ್ಟಿಂಜ , ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ ಕೊಟ್ಟಿಂಜ , ಗುತ್ತಿಗೆದಾರರಾದ ದಿನೇಶ್ ರೈ ಕುಪ್ಪಿಲ , ಲೋಕನಾಥ್ ಆಚಾರ್ಯ , ಸಂತೋಷ್ ಕುಮಾರ್ ಕೊಡ್ಮಾಣ್ , ಕಾಂತಪ್ಪ ಕುಲಾಲ್ ಕೊಳಂಬೆ , ಜಯಂತಿ ಸಿ ಶೆಟ್ಟ್ಟಿಕೊಟ್ಟಿಂಜ , ರಾಮಚಂದ್ರ ಆಳ್ವ ದೆಕ್ಕೆದು, ರಮೇಶ್ ಶೆಟ್ಟಿ ಕೊಟ್ಟಿಂಜ ಸಂತೋಷ್ ಎನ್ ಶೆಟ್ಟಿ ಕೊಟ್ಟಿಂಜ, ಭಾಸ್ಕರ ಬಂಗೇರ ಕೊಳಂಬೆ , ಮತ್ತಿತರರು ಉಪಸ್ಥಿತರಿದ್ದರು

