ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು.ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ, ಮುಖ್ಯ ಶಿಕ್ಷಕಿ ಸ್ವರ್ಣಲತಾ, ವಿದ್ಯಾರ್ಥಿ ನಾಯಕಿ ಖತೀಜ ಅಫ್ರ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿ ಕುರಿತಾದ ಉಪನ್ಯಾಸ, ಹಾಡುಗಳ ಗಾಯನ ನಡೆಯಿತು. ಶಿಕ್ಷಕಿ ಹಸೀನಾ ಗಾಂಧಿ ತತ್ವಗಳ ಬಗ್ಗೆ ಬೆಳಕು ಚೆಲ್ಲಿದರು. ವೀಣಾ ಶ್ರಮದಾನದ ಪ್ರಯುಕ್ತ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳಿಂದ ಶಾಲಾ ಆವರಣ ಮತ್ತು ಮುಖ್ಯ ರಸ್ತೆವರೆಗಿನ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಜೋತ್ಸ್ನಾ ಸ್ವಾಗತಿಸಿ ಶೋಭಾ ವಂದಿಸಿದರು. ವೀಣಾಶಾರದ ಕಾರ್ಯಕ್ರಮ ನಿರೂಪಿಸಿದರು.

