ಬಂಟ್ವಾಳ, : ಮನೆಯ ಯಜಮಾನನ ಸಾವಿನಿಂದ ನೊಂದು ಶನಿವಾರ ರಾತ್ರಿ ಮೈಸೂರಿನ ಕುಟಂಬವೊಂದು ನೇತ್ರಾವತಿ ನದಿಗೆ ಹಾರಿದ್ದು, ಈ ಪೈಕಿ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಮಗ ಕೌಶಿಕ್ ಮಂದಣ್ಣ ಅವರ ಮೃತದೇಹ ಮಂಗಳವಾರವಾರ ಪತ್ತೆಯಾಗಿದೆ.
ಬಂಟ್ವಾಳ ತಾಲೂಕಿನ ಬಿಮೂಡ ಗ್ರಾಮದ ಸಮೀಪದ ಪರ್ಲಿಯಾ- ತಾಳಿಪಡ್ಪು ಎಂಬಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.ತಾಳಿಪಡ್ಪು ನದಿ ತೀರದಲ್ಲಿ ಮೃತದೇಹವನ್ನು ತೇಳುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳ ತಂಡ, ಎನ್ಡಿಆರ್ಎಫ್ನ ತಂಡ, ಸ್ಥಳೀಯ ಈಜುಗಾರರ ತಂಡ
ಮೃತದೇಹವನ್ನು ಮೇಲಕೆತ್ತಿ ಮುಂದಿನ ಕಾರ್ಯಕ್ಕಾಗಿ ಮಂಗಳೂರು ಕಡೆಗೆ ರವಾನಿಸಲಾಗಿದೆ.

