ಕೈಕಂಬ:ಪೊಳಲಿಸಮೀಪದ ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಇತ್ತಿಚೇಗೆ ನಡೆಯಿತು. ಸಂಘದ 2018-19ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನು ವಾಮನ ಪೂಜಾರಿ ವಹಿಸಿದ್ದರು.ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸರೋಜಿನಿ ಹಾಲಿನ ಗುಣಮಟ್ಟದ ಹಾಲು ನೀಡಿದಾಗ ರೈತರಿಗೆ ಬರುವ ಆದಾಯದ ಬಗ್ಗೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ರಾಧಕೃಷ್ಣ ರೈ,ನಿರ್ದೇಶಕರಾದ ಪಿ. ಪದ್ಮನಾಭ ಭಟ್,ಅಣ್ಣು ಮೂಲ್ಯ,ಚಾಲ್ರ್ಸ್ ಡಿ”ಸೋಜ,ಆನಂದ ಪೂಜಾರಿ, ಪಿ.ಗೀತಾ,ಮೋಹಿನಿ ಪೊಳಲಿ,ಸುಂದರ ಮೂಲ್ಯ,ಭಾಸ್ಕರ ಸಪಲಿಗ,ಮೋಹಿನಿ ಪುಂಚಮೆ,ವನಿತಾಕ್ಷಿ ಇದ್ದರು. ಕಾರ್ಯದರ್ಶಿ ರಕ್ಷಿತಾ ಸ್ವಾಗತಿಸಿ ವಂದಿಸಿದರು.


