ಬಂಟ್ವಾಳ: ಬಿ ಸಿ ರೋಡು ಹಿಂದೂ ಧಾರ್ಮಿಕ ಸೇವಾ ಸಮಿತಿ ಇದರ ಆಶ್ರಯದಲ್ಲಿ 40 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸೆ.02 ಸೋಮವಾರ ದಿಂದ ಸೆ.05 ಗುರುವಾರದವರೆಗೆ ಬಿಸಿ ರೋಡಿನಲ್ಲಿ ನಡೆಯಲಿದೆ.
ಗಣೇಶನ ವಿಸರ್ಜನೆಯ ಸಮಯಾದಲ್ಲಿ ಶೋಭಾ ಯಾತ್ರೆಯು ಬಿ ಸಿ ರೋಡು ಮಾರ್ಗವಾಗಿ ಕೈಕಂಬ ತಲುಪಿ ನಂತರ ತಲಪಾಡಿ ಜುಮಾದಿಗುಡ್ಡೆಯ ಗಣಪತಿ ಕಟ್ಟೆ ತಲುಪಲಿದೆ. 
ಗಣಪತಿ ಕಟ್ಟೆ ವಠಾರದಲ್ಲಿ ಹಿಂದು ಸೇವಾ ಸಂಘ ಜುಮಾದಿಗುಡ್ಡೆ ವತಿಯಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು.ಕಾರ್ಯಕ್ರಮ ನಡೆಯುವ ಪರಿಸರದ ವಠಾರವನ್ನು ಭಾನುವಾರ ಸೇವಾ ಸಂಘದ ಮುಖ್ಯ ಕಾರ್ಯಕರ್ತರಾದ ಮಹೇಶ್ ಜುಮಾದಿಗುಡ್ಡೆ ನೇತೃತ್ವದಲ್ಲಿ ಹಿಂದು ಸೇವಾ ಸಂಘದ ಕಾರ್ಯಕರ್ತರೊಂದಿಗೆ ಜುಮಾದಿಗುಡ್ಡೆ ಗಣಪತಿ ಕಟ್ಟೆ ವಠಾರವನ್ನು ಸ್ವಚ್ಚತೆಗೊಳಿಸಿಲಾಯಿತು. 
ಎಸ್. ಆರ್. ಬಿ ಸಿ ರೋಡು
