ಕಲ್ಲಡ್ಕ:ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿಈ ಶೈಕ್ಷಣಿಕ ವರ್ಷದ ಮೊದಲನೇ ಪಾಲಕರ ಸಭೆ ವೇದವ್ಯಾಸದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಪ್ರಾರ್ಥನೆ ಮೂಲಕ ಪ್ರಾರಂಭ ಮಾಡಲಾಯಿತು.ಮನೆಯಲ್ಲಿ ಭಜನೆ ಹೇಳುವುದು, ಶ್ಲೋಕಗಳನ್ನು ಹೇಳುವುದು, ದೇವರ ಪೂಜೆ ಮಾಡುವುದು.ತನ್ನ ಕೆಲಸಗಳನ್ನು ತಾನೇ ಮಾಡುವುದು.ಊಟ ಮಾಡುವಾಗಒಟ್ಟಿಗೆಕೂತು ಪ್ರಾರ್ಥನೆ ಹೇಳಿ ಊಟ ಮಾಡುವುದು.ಅಮ್ಮನ ಕೆಲಸದಲ್ಲಿ ಸಹಾಯ ಮಾಡುವುದು (ಉದಾ: ತರಕಾರಿತುಂಡು ಮಾಡುವುದು,ಗುಡಿಸುವುದು)ಮನೆಯಲ್ಲಿ ಹಿರಿಯರಿಗೆ ನಮಸ್ಕರಿಸುವುದು, ಶ್ಲೋಕಗಳನ್ನು ಮನೆಯವರಿಗೆ ಹೇಳಿಕೊಡುವುದು. ಮನೆಯಲ್ಲಿ ನಿಧಾನವಾಗಿ ಶಾಂತವಾಗಿ ಮಾತನಾಡಲು ಹೇಳುವುದು.
ಈ ರೀತಿಯಾಗಿಪಾಲಕರುತಮ್ಮಮಕ್ಕಳಲ್ಲಿ ಆದ ಬದಲಾವಣೆಗಳನ್ನು ಹಂಚಿಕೊಂಡರು.ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರುಇಲ್ಲಿನಅಧ್ಯಕ್ಷರಾದಡಾ|| ಪ್ರಭಾಕರ ಭಟ್ ಪಾಲಕರಿಗೆ ಮಾರ್ಗದರ್ಶನ ಮಾಡಿದರು.ವೇದಿಕೆಯಲ್ಲಿವಿದ್ಯಾಕೇಂದ್ರದಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿಒಟ್ಟು 93 ಪಾಲಕರು 9 ದಂಪತಿಗಳು ಹಾಗೆಯೇ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶ್ರೀಮತಿ ಪೂಜಾ ಸ್ವಾಗತಿಸಿ, ಶ್ರೀಮತಿ ತ್ರಿವೇಣಿ ವಂದಿಸಿ, ಶ್ರೀಮತಿ ಚೈತ್ರ ನಿರೂಪಿಸಿದರು.
