ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿ ಮುಂಭಾಗದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್ ,ತಾ.ಪಂ ಸದಸ್ಯ ಪ್ರಭಾಕರ ಪ್ರಭು ,ಬಿಜೆಪಿ ಕಾರ್ಯದರ್ಶಿ ಸಿತಾರಾಮ ಪೂಜಾರಿ,ಮಚ್ಚೇಂದ್ರ ಸಾಲ್ಯಾನ್ ,ಕೇಶವ ,ಮನೋಜ್,ವಿನಿತ್,ರೂಪೇಶ್ ಆಚಾರ್ಯ,ಗಣೇಶ್ ದಾಸ್,ಮಹೇಶ್ ,ರಾಜರಾಮ್ ನಾಯಕ್,ನಾಗೇಶ್ ಬೊಂಡಾಲ,ಯಶವಂತ ನಗ್ರಿ,ಸತೀಶ್ ಪಲ್ಲಮಜಲು ಸಹಿತ ಹಲವಾರು ಮಂದಿ ಕಾರ್ಯಕರ್ತರು ಸಂಭ್ರಮದಲ್ಲಿ ಪಾಲ್ಗೊಂಡರು.ಹಾಗೆಯೇ ಬಂಟ್ವಾಳದಲ್ಲು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.


