ಬಂಟ್ವಾಳ : ಗೃಹರಕ್ಷಕದಳದಲ್ಲಿ ಸುಮಾರು 37ವರ್ಷಗಳಲ್ಲಿ 2016ರಿಂದ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ.ಆರ್.ಶ್ರೀನಿವಾಸ ಆಚಾರ್ಯ ರವರನ್ನು ನ್ಯಾಯಾಲಯದ ಆವರಣದಲ್ಲಿ ವಾರದ ಕವಾಯತ್ ನಲ್ಲಿ ಕಮಾಂಡೆಂಟ್ ಡಾ.ಮುರಳಿಮೋಹನ್ ಚುಂತಾರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ರಮೇಶ್ , ಮಾಜಿ ಘಟಕಾಧಿಕಾರಿ ಕೃಷ್ಣ ನಾಯಕ್, ಪ್ರಭಾರ ಘಟಕಾಧಿಕಾರಿ ಐತಪ್ಪ, ಹಿರಿಯ ನಿವೃತ್ತ ಗೃಹರಕ್ಷಕ ಸಿಬ್ಬಂದಿ ಅರುಣ್ ಆಚಾರ್ಯ, ಕವಾಯತು ಅಧಿಕಾರಿ ಶಿವರಾಜ್, ಹಿರಿಯ ಗೃಹರಕ್ಷಕಿ ಮಾಲತಿ, ಹಿರಿಯರಾದ ಯಾದವ, ಪಶುಪತಿ, ಚಿದಾನಂದ, ಭಾಸ್ಕರ, ವಿಜಯಕುಮಾರ್ ಮತ್ತು ಸಿಬ್ಬಂದಿವರ್ಗ ಮತ್ತಿತರರು ಉಪಸ್ಥಿತರಿದ್ದರು.
