ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲು ವರಕಿಲದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರ ಅಲ್ಪಸಂಖ್ಯಾಕ ನಿಧಿಯ 25 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟು ರಸ್ತೆ ನಿರ್ಮಾಣ ಮಾಡಲಾಗಿದ್ದು, ಶುಕ್ರವಾರ ಉದ್ಘಾಟಿಸಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕೆ.ಪಿ ಸುಚರಿತ ಶೆಟ್ಟಿ ಉದ್ಘಾಟಿಸಿದರು. ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸದಸ್ಯರಾದ ತಾಹೀರ ಬೇಗಂ, ಗಿರೀಶ್ ಕುಮಾರ್ ಹಂಡೇಲು, ಶಶಿಧರ್ ಅಂಚನ್, ಮಾಜಿ ಸದಸ್ಯ ಎಚ್.ಮಹಮ್ಮದ್, ಬಿಜೆಪಿ ಪುತ್ತಿಗೆ ಶಕ್ತಿ ಕೇಂದ್ರ ಅಧ್ಯಕ್ಷ ಅಜಯ್ ರೈ, ಮುಖಂಡರಾದ ರಂಜಿತ್ ಪೂಜಾರಿ, ಇರ್ಫಾನ್, ಬಶೀರ್ ಉಪಸ್ಥಿತರಿದ್ದರು.
