ಬಂಟ್ವಾಳ:ಬಿ ಸಿ ರೋಡು ಸರಕಾರಿ ನೌಕರರ ವಸತಿ ಗೃಹದ ಬಳಿರುವ. ಕೊಡಂಗೆ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಮನೆಗೆ ಚಾಲನೆ ನೀಡಲಾಯಿತು. ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಚಿಣ್ಣರ ಮನೆಯನ್ನು ಉದ್ಘಾಟಿಸಿ ಮಾತನಾಡಿ,ಮಕ್ಕಳನ್ನು ಆಕರ್ಷಿಸುವ ನಿಟ್ಡಿನಲ್ಲಿ ಶಾಲೆಯನ್ನು ವೈವಿಧ್ಯಮಯವಾಗಿ ರೂಪಿಸಿರುವ ಶಾಲಾ ಆಡಳಿತ ಮಂಡಳಿ,ಹಳೇ ವಿದ್ಯಾರ್ಥಿಗಳ ಕಾರ್ಯ ಅಭಿನಂದನೀಯವಾಗಿದೆ ಎಂದರು
ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭೆ ಸ್ಥಳಿಯ ಸದಸ್ಯರಾದ ಗೋವಿಂದ ಪ್ರಭು, ಮಹಮ್ಮದ್ ನಂದರಬೆಟ್ಟು ,ಕೊಡಂಗೆ ಎಜುಕೇಶನ್ ಟೃಸ್ಟ್ ಅಧ್ಯಕ್ಷ ಜಾಕೀರ್ ಹುಸೇನ್,ಎಸ್ ಡಿ ಎಂ .ಸಿ.ಅಧ್ಯಕ್ಷ ಬಿ ಎಂ ಇಸ್ಮಾಯಿಲ್ , ಸಾಮಾಜಿಕ ಕಾರ್ಯಕರ್ತ ಪಿ.ಎ.ರಹೀಂ ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರಿ ಈ ಸಂದರ್ಭದಲ್ಲಿ ಹಾಜರಿದ್ದರು.


