ಮೂಡುಬಿದಿರೆ: ಎಂಆರ್ಪಿಎಲ್ ಕೊಡುಗೆಯಾಗಿ ಶಾಸಕರ ಸಹಕಾರದೊಂದಿಗೆ ಮೂಡುಬಿದಿರೆ ಖಾಸಗಿ ಬಸ್ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಎಸ್ಕೆಎಫ್ ಎಲಿಕ್ಸರ್ ಪ್ರೈ.ಲಿ. ಉದ್ಯಮದ `ಶುದ್ಧ ಕುಡಿಯುವ ನೀರಿನ ಘಟಕ’ವನ್ನು ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಉದ್ಘಾಟಿಸಿದರು.

ಆರೋಗ್ಯ ಪೂರ್ಣ ಜೀವನಕ್ಕಾಗಿ ಶುದ್ಧ ಕುಡಿಯುವ ನೀರಿನ ಸೇವನೆ ಅತಿ ಅಗತ್ಯವಾಗಿದ್ದು ಈ ದಿಸೆಯಲ್ಲಿ ತಮ್ಮ ಕೋರಿಕೆಯನ್ನು ಮನ್ನಿಸಿ ಎಸ್ಕೆಎಫ್ ನೀರಿನ ಘಟಕವನ್ನು ನೀಡಿರುವ ಎಂಆರ್ಪಿಎಲ್ ಸಂಸ್ಥೆಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು.
ಎಸ್ಕೆಎಫ್ ಸಂಸ್ಥೆಯ ಪಾಲುದಾರ ಪ್ರಜ್ವಲ್ ಆರ್. ಆಚಾರ್ಯ, ಪುರಸಭಾ ನೂತನ ಸದಸ್ಯರು , ಗ್ರಾ.ಪಂ. ಸದಸ್ಯರು, ಬಿಜೆಪಿ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
