ಬಂಟ್ವಾಳ : ದ ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಬಂಟ್ವಾಳ ವಲಯದ ವತಿಯಿಂದ ಎಸ್ ಎಸ್ ಎಲ್ ಸಿ ಹಾಗು ಪಿಯುಸಿ ಪರೀಕ್ಷೆ ಯಲ್ಲಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು. ಬಂಟ್ವಾಳ ಬೈಪಾಸ್ ನಲ್ಲಿರುವ ಆಟೋಲೈನ್ಸ್ ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿಶ್ವನಾಥ್ ಬಿ. ವಹಿಸಿದ್ದರು.
ಈ ಸಂದರ್ಭ ಸಂಘದ ಗೌರವ ಸಲಹೆಗಾರರಾದ ಸುಧಾಕರ್ ಸಾಲ್ಯಾನ್ ಹಾಗು ಪ್ರತಿಮಾ ದಂಪತಿಗಳ ಪುತ್ರ ಸುಜನ್ ಎಸ್. ಸಾಲ್ಯಾನ್ , ಅಣ್ಣು ಪೂಜಾರಿ , ಶಶಿಕಲಾ ದಂಪತಿಗಳ ಪತ್ರಿಯರಾದ ಧೀಕ್ಷಾ ಹಾಗು ಶ್ರಾವ್ಯ ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಸುಧೀರ್ , ಕೋಶಾಧಿಕಾರಿ ಪ್ರಶಾಂತ್ ಭಂಡಾರ್ಕಾರ್ , ಸಂಘಟನಾ ಕಾರ್ಯದರ್ಶಿ ಗಣೇಶ್ ಸುವರ್ಣ , ಜಗದೀಶ್ ರೈ , ಉಪಾಧ್ಯಕ್ಷರಾದ ರಮೇಶ್ ಭಂಡಾರಿ , ರಾಜ ಬೈಪಾಸ್ , ಜತೆ ಕಾರ್ಯದರ್ಶಿ ಸಿದ್ದಿಕ್ , ಗೌರವಸಲೆಹೆಗಾರರಾದ ಸತೀಶ್ ಶೆಟ್ಟಿ , ರಮೇಶ್ ಬೈಪಾಸ್ , ಕ್ರೀಡಾ ಕಾರ್ಯದರ್ಶಿ ಗಳಾದ ನವೀನ , ನವೀನ್ ಕೈಕುಂಜೆ , ಪ್ರಸಾದ್ ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು
